Media
ಬೇಕಾಗಿದ್ದಾರೆ
Date: 04-02-2019
ಆಯ್ಕೆಗೊಂಡ ಅಭ್ಯರ್ಥಿಗಳಿಗೆ ವಸತಿ ಸೌಲಭ್ಯ. .ಆಸಕ್ತ ಅಭ್ಯರ್ಥಿಗಳು 21-02-2019ರ ಒಳಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸುವುದು.
70ನೇ ಗಣರಾಜ್ಯೋತ್ಸವ ದಿನಾಚರಣೆ
Date: 28-01-2019
ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಮತ್ತು ಪ್ರಾಥಮಿಕ ಶಾಲೆಯಲ್ಲಿ 70ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಮಾಜಿ ಸದಸ್ಯರಾದ ಮಹಮ್ಮದ್ ಆಲಿ ಧ್ವಜಾರೋಹಣ ಗೈದರು.
ರಾಷ್ಟ್ರೀಯ ಮತದಾರರ ದಿನಾಚರಣೆ
Date: 28-01-2019
ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜ.25ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ನಡೆಸಲಾಯಿತು. ಶಾಲಾ ಮುಖ್ಯಗುರು ಮಾತನಾಡಿ ಮತದಾನ ನಮ್ಮೆಲ್ಲರ ಹಕ್ಕಾಗಿದೆ.
ಭರತನಾಟ್ಯ ನೃತ್ಯ ಶಾಲೆ ಉದ್ಘಾಟನೆ
Date: 07-01-2019
ಶ್ರೀರಾಮಕುಂಜೇಶ್ವರ ಕಿಂಡರ್ ಗಾರ್ಟನ್ನಲ್ಲಿ ಶ್ರೀರಾಮಕುಂಜೇಶ್ವರಯನ್ನು ವಿದುಷಿ ಆರಾಧಿತ ಅವರು ಉದ್ಘಾಟಿಸಿದರು. ನಂತರ ಮಾತನಾಡಿದವರು ಭಾರತೀಯ ನೃತ್ಯಕಲೆಗಳಲ್ಲಿ ವಿವಿಧ ರೀತಿಯ ನೃತ್ಯಕಲೆಗಳು ಇದೆ. ಅದರಲ್ಲಿ ನಮ್ಮ ಶಾಸ್ತ್ರೀಯ ನೃತ್ಯವೊಂದಾಗಿದೆ.
ಸಂಗೀತ ಶಾಲೆ ಉದ್ಘಾಟನೆ
Date: 29-12-2018
ಶ್ರೀರಾಮಕುಂಜೇಶ್ವರ ಕಿಂಡರ್ ಗಾರ್ಟನ್ನಲ್ಲಿ ವಿದ್ವಾತ್ ಶ್ಯಾಮಲ ನಾಗರಾಜ್ ಅವರು ಶ್ರೀರಾಮಕುಂಜೇಶ್ವರ ಸಂಗೀತ ಶಾಲೆಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದವರು ಸಂಗೀತ ಕಲಿಕೆಯಿಂದ ಏಕಾಗ್ರತೆ ಹೆಚ್ಚಾಗುತ್ತದೆ. ವಿದ್ಯಾಭ್ಯಾಸಕ್ಕೆ ತೊಂದರೆಯಾಗವುದು ಎನ್ನುವುದು ಪೋಷಕರ ತಪ್ಪು ಕಲ್ಪನೆಯಾಗಿದೆ. ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಶಿಕ್ಷಣದಲ್ಲಿ ಉತ್ತಮ ಅಂಕ ಗಳಿಸಿದ್ದಾರೆ ಎಂದು ಹೇಳಿದರು.
‘ಗ್ರ್ಯಾಂಡ್ ಪೆರೇನ್ಸ್ ಡೇ’
Date: 19-12-2018
ಶ್ರೀರಾಮಕುಂಜೇಶ್ವರ ಕಿಂಡರ್ ಗಾರ್ಟನ್ನಲ್ಲಿ ಗ್ರ್ಯಾಂಡ್ ಪೆರೇನ್ಸ್ ಡೇ’ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಗುಮ್ಮಣ್ಣ ಗೌಡ ಮಕ್ಕಳಿಗೆ ಮೌಲ್ಯ ಆಧಾರಿತ ರೀತಿಯ ವಿಷಯಗಳನ್ನು ತಿಳಿಸಬೇಕು. ಇತ್ತಿಚೀನ ದಿನಗಳಲ್ಲಿ ಕೆಲ ಪೋಷಕರು ಮಕ್ಕಳಿಗೆ ಮೊಬೈಲ್ ನೀಡುತ್ತಿದ್ದಾರೆ, ಆದ್ರೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಮಕ್ಕಳ ಶಿಕ್ಷಣದಲ್ಲೂ ಕುಂಠಿತವಾಗುವುದನ್ನು ನಾವು ಗಮನಿಸಬಹುದು ಎಂದು ಹೇಳಿದರು.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ
Date: 03-12-2018
ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ.ಶಾಲೆ ರಾಮಕುಂಜದಲ್ಲಿ ಮಂಗಳೂರಿನ ಅಕ್ಷರ ಫೌಂಡೇಶನ್ ವತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ರಾಜ್ಯಮಟ್ಟದ ಕರಾಟೆ ಸ್ಪರ್ಧೆ
Date: 28-11-2018
ಇಂಪ್ಯಾಕ್ಟ್ ಆಟ್ಸ್ ಆ್ಯಂಡ್ ಸ್ಪೋರ್ಟ್ ಕರಾಟೆ ಕ್ಲಬ್ ಹಾಗೂ ಜೆಸಿಐ ಸುಳ್ಯ ಪಯಸ್ವಿನಿ ವತಿಯಿಂದ ಸುಳ್ಯ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನ.24 ಹಾಗೂ 25ರಂದು ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ರಾಕೇಶ್.56.ಕೆಜೆ ವಿಭಾಗದಲ್ಲಿ ಪ್ರಥಮ , ಯೋಚೀತ್.46ಕೆಜಿ ವಿಭಾಗದಲ್ಲಿ ಪ್ರಥಮ , ಮಹದೇವ್ ಸ್ವಾಮಿ 53ಕೆಜಿ. ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ . ಇವರಿಗೆ ದೈಹಿಕ ಶಿಕ್ಷಕರಾದ ವಾಸಪ್ಪ ಹಾಗೂ ಪ್ರೇಮ ಮಾರ್ಗದರ್ಶನ ನೀಡಿದರು ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ತಿಳಿಸಿದರು.