Contact : +91 9663 755 105 / sremramakunja@gmail.com

‘ಗ್ರ್ಯಾಂಡ್ ಪೆರೇನ್ಸ್ ಡೇ’

ಶ್ರೀರಾಮಕುಂಜೇಶ್ವರ ಕಿಂಡರ್ ಗಾರ್ಟನ್‍ನಲ್ಲಿ ಗ್ರ್ಯಾಂಡ್ ಪೆರೇನ್ಸ್ ಡೇ’ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಗುಮ್ಮಣ್ಣ ಗೌಡ ಮಕ್ಕಳಿಗೆ ಮೌಲ್ಯ ಆಧಾರಿತ ರೀತಿಯ ವಿಷಯಗಳನ್ನು ತಿಳಿಸಬೇಕು. ಇತ್ತಿಚೀನ ದಿನಗಳಲ್ಲಿ ಕೆಲ ಪೋಷಕರು ಮಕ್ಕಳಿಗೆ ಮೊಬೈಲ್ ನೀಡುತ್ತಿದ್ದಾರೆ, ಆದ್ರೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಮಕ್ಕಳ ಶಿಕ್ಷಣದಲ್ಲೂ ಕುಂಠಿತವಾಗುವುದನ್ನು ನಾವು ಗಮನಿಸಬಹುದು ಎಂದು ಹೇಳಿದರು.

ಸ್ಪರ್ಧೆಗಳು : ಕಿಂಡರ್ ಗಾರ್ಟನ್ ವಿದ್ಯಾರ್ಥಿಗಳ ಅಜ್ಜ-ಅಜ್ಜಿ ಅವರಿಗೆ ಮ್ಯೂಸಿಕಲ್ ಚಯರ್, ಸೂಜಿಗೆ ದಾರ ಹಾಕುವುದು ಮತ್ತು ಕಲರ್ಸ್ ಬಾಲ್ಸ್ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನಂತರ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ಶಾಲಾ ಮುಖ್ಯಗುರು ಲೋಹಿತ ಸ್ವಾಗತಿ, ಶಿಕ್ಷಕಿ ಭವ್ಯ ವಂದಿಸಿದರು. ಶಿಕ್ಷಕಿ ದಿವ್ಯ ಕುಮಾರಿ ನಿರೂಪಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ ವಿದ್ಯಾ ವರ್ಧಕ ಸಭಾದ ಟ್ರಸ್ಟಿ ಲಿಂಗಪ್ಪ ಗೌಡ ಕಡೆಂಬ್ಯಾಲ್ ಸಹಶಿಕ್ಷಕರು ಹಾಗೂ ಸಂಸ್ಥೆಯ ಸಿಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.