Latest News

150ನೇ ಗಾಂಧೀಜಿ ಜಯಂತಿ ಆಚರಣೆ
ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ 150ನೇ ಗಾಂಧೀಜಿ ಜಯಂತಿಯನ್ನು ಆಚರಿಸಲಾಯಿತು. ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಂತರ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಗಾಂಧೀಜಿ ತತ್ವ ಸಿದ್ಧಾಂತವನ್ನು ನಾವು ಅರಿತುಕೊಳ್ಳಬೇಕು.ಈ ಮಾರ್ಗದಲ್ಲಿ ನಡೆಯಲು ಉತ್ಸುಕವಾಗಿದೆ. ಪರಿಸರ, ಶಿಕ್ಷಣ ಕೋಮು ಸೌಹಾರ್ದತೆಯ ಬಗ್ಗೆ ಗಾಂಧೀಜಿಯವರ ಮೂಲಕವೇ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ನಂತರ ಗಾಂಧೀಜಿ ಜಯಂತಿ ಅಂಗವಾಗಿ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್ ಸಹಶಿಕ್ಷಕರಾದ ವಸಂತ್, ದಿವ್ಯ.ಆರ್.ಕೆ, ದೈಹಿಕ ಶಿಕ್ಷಕರಾದ ಪ್ರೇಮ, ವಾಸಪ್ಪ ಹಾಗೂ ಸಂಸ್ಥೆಯ ಸಿಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.